ನಾಳೆ ಮದುವೆ ಮಂಟಪ ಏರಬೇಕಿದ್ದವಳು ಮಸಣ ಸೇರಿದಳು! ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ; ಒಂದು ಸುಂದರ ಸಂಸಾರ ದುರಂತ ಅಂತ್ಯ! 😭
ಮೈಸೂರು: ಮದುವೆಯ ಸಂಭ್ರಮದಲ್ಲಿದ್ದ ಆ ಮನೆಯಲ್ಲಿ ಇಂದು ಮರಣ ಮೃದಂಗ ಬಾರಿಸಿದೆ. ನಾಳೆ ಮದುವೆಯಾಗಿ ಹೊಸ ಜೀವನಕ್ಕೆ ಹೆಜ್ಜೆ ಇಡಬೇಕಾಗಿದ್ದ ಯುವತಿ, ತನ್ನ ಹೆತ್ತವರೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಅತ್ಯಂತ ಆಘಾತಕಾರಿ ಮತ್ತು ಮನನೋಯಿಸುವ ಸುದ್ದಿ ಮೈಸೂರಿನಿಂದ ವರದಿಯಾಗಿದೆ.
”ನಾಳೆ ಹಸೆಮಣೆ ಏರಬೇಕಿದ್ದವಳು ಇಂದು ಮಸಣ ಸೇರಿದ್ದಾಳೆ…” ಎಂದು ಮೃತ ಯುವತಿಯ ಅಜ್ಜಿ ಚಿನ್ನಮ್ಮ ಕಣ್ಣೀರಿಡುತ್ತಿರುವ ದೃಶ್ಯ ಎಂಥವರ ಕರಳನ್ನೂ ಚುರುಕ್ ಎನಿಸುವಂತಿದೆ.
📍 ಏನಿದು ಘಟನೆ? ಎಲ್ಲಿ ನಡೆದಿದ್ದು?
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಈ ಮಹಾ ದುರಂತ ಸಂಭವಿಸಿದೆ. ಶಿವಣ್ಣ, ನಾಗರತ್ನ ಹಾಗೂ ಅವರ ಪುತ್ರಿ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಇಡೀ ಕುಟುಂಬವೇ ಈ ತರಹದ ತೀವ್ರ ನಿರ್ಧಾರ ತೆಗೆದುಕೊಳ್ಳಲು ಅದೇ ಗ್ರಾಮದ ಉಲ್ಲಾಸ್ ಗೌಡ ಎಂಬಾತ ನೀಡಿದ ಭೀಕರ ಮಾನಸಿಕ …
Comments are closed.